ನಮ್ಮ ತಂಟೆಗೆ ಬರಬೇಡಿ, ಸರಿ ಇರಲ್ಲ: ಅಬ್ಬರಿಸಿದ ಡಿ.ಕೆ.ಶಿವಕುಮಾರ್

ಬುಧವಾರ, 5 ಏಪ್ರಿಲ್ 2017 (13:47 IST)
ನಮ್ಮ ತಂಟೆಗೆ ಬರಬೇಡಿ, ಸರಿ ಇರಲ್ಲ. ಏನಿದ್ದರೂ ಗುಂಡ್ಲುಪೇಟೆಯಿಂದ ಹೊರಗಡೆ ಇಟ್ಟುಕೊಳ್ಳಿ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅಬ್ಬರಿಸಿದ್ದಾರೆ.
 
ಗುಂಡ್ಲುಪೇಟೆ ಉುಪಚುನಾವಣೆ ಮೇಲುಸ್ತುವಾರಿ ಹೊತ್ತಿರುವ ಸಚಿವ ಶಿವಕುಮಾರ್, ಯಡಿಯೂರಪ್ಪನವರಿಗೆ ಅಧಿಕಾರ ಬರಬಹುದು. ಆದರೆ ವಿರೋಧ ಪಕ್ಷದ ನಾಯಕನ ಸ್ಥಾನ ಅಷ್ಟೇ ಸಿಗಬಹುದು. ಅದಕ್ಕಿಂತ ಹೆಚ್ಚಿನ ಸ್ಥಾನ ದೊರೆಯುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
 
ಶಾಂತಿಯುತವಾಗಿ ಚುನಾವಣೆ ನಡೆಸುವುದು ಹೇಗೆ ಎನ್ನುವುದು ನಮಗೆ ಗೊತ್ತು. ನಮ್ಮ ತಂಟೆಗೆ ಬರಬೇಡಿ. ನಿಮ್ಮದ ಏನಿದ್ದರೂ ಗುಂಡ್ಲುಪೇಟೆಯ ಹೊರಗಡೆ ಇಟ್ಟುಕೊಳ್ಳಿ ಎಂದು ಬಿಜೆಪಿ ಮುಖಂಡರಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ