ವಂಚನೆ, ಅತ್ಯಾಚಾರ ಆರೋಪಗಳಲ್ಲಿ ಸಿಲುಕಿರುವ ಕೇಂದ್ರ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರು ಅಲ್ಪಾವಧಿ ಮರೆವಿನಿಂದ ಬಳಲುತ್ತಿದ್ದು, 3 ದಿನಗಳ ಅಂತರದಲ್ಲಿ ಜ್ಞಾಪಕ ಕಳೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.
2008 ಸೆಪ್ಟೆಂಬರ್ 14 ರಂದು ಮಣಿಪಾಲ್ನಿಂದ ಮಂಗಳೂರಿಗೆ ತೆರುಳುತ್ತಿದ್ದಾಗ ಪಡುಬಿದ್ರೆ ಬಳಿ ಕಾರ್ತಿಕ್ ಭೀಕರ ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಕಾರ್ತಿಕ್ ಪ್ರಾಣಾಪಾಯದಿಂದ ಪಾರಾಗಿದ್ದರು ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅಲ್ಪಾವಧಿ ಮರೆಗುಳಿತನದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
ಸದಾನಂದಗೌಡ ಪುತ್ರ ಕಾರ್ತಿಕ್ ವಿರುದ್ಧ ವಂಚನೆ, ಅಪಹರಣ ಹಾಗೂ ಅತ್ಯಾಚಾರ ಆರೋಪವನ್ನು ನಟಿ ಮೈತ್ರಿಯಾಗೌಡ ಅವರು ಮಾಡಿದ್ದು, ಈ ಸಂಬಂಧ ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.