ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮರದೂರು ಮೂಲದ ಶಿವನಾಯ್ಕ ಎಂಬುವರು ಕುಮಾರ್ ಮತ್ತು ಮಮತಾ ಎಂಬುವರಿಂದ 30,000 ರೂಪಾಯಿ ಮೀಟರ್ ಬಡ್ಡಿಯ ಮೇಲೆ ಸಾಲ ಪಡೆದಿದ್ದರು. ಸಾಲ ನೀಡಿದವರು ಮರುಪಾವತಿಸುವಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರತಿ ನಿತ್ಯ ಕಿರುಕುಳ ನೀಡಿತ್ತಿದ್ದರು. ಇದರಿಂದ ಮನನೊಂದ ಶಿವನಾಯ್ಕ ಅವರ ಪುತ್ರಿ ರೋಜಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.