ಅಂಗೈ ಹುಣ್ಣಿಗೆ ಸಿಎಂ ಸಿದ್ದರಾಮಯ್ಯಗೆ ಕನ್ನಡಿ ಬೇಕೆ. 1995ರಲ್ಲಿ ನಾನೇ ಮುಖ್ಯಮಂತ್ರಿಯಾಗಿದ್ದೆ. ಬಿಎಂಐಸಿ ಯೋಜನೆಗೆ ನಾನೇ ಅನುಮೋದನೆ ನೀಡಿದ್ದೆ. ಅಲ್ಲಿಂದ ಇಲ್ಲಿವರೆಗೆ ಸಿಬಿಐ ತನಿಖೆಯಾಗಲಿ. ಈ ವಿಚಾರವನ್ನು ಸಂಸತ್ತಿನಲ್ಲಿ ಕೂಡ ಚರ್ಚಿಸುತ್ತೇನೆ. ಸದನಸಮಿತಿ ಬಗ್ಗೆ ನನಗೆ ನಂಬಿಕೆಯಿಲ್ಲ, ಸಿಬಿಐ ತನಿಖೆಯಾಗಲಿ ಎಂದು ಜೆಡಿಎಸ್ ಕಚೇರಿಯಲ್ಲಿ ದೇವೇಗೌಡರು ತಿಳಿಸಿದ್ದಾರೆ.