ರಾಘವೇಶ್ವರ ಶ್ರೀಗಳ ಪರ ಹೇಳಿಕೆ ನೀಡದಂತೆಧರ್ಮದರ್ಶಿಗೆ ಬೆದರಿಕೆ ಕರೆ

ಶನಿವಾರ, 25 ಅಕ್ಟೋಬರ್ 2014 (11:34 IST)
ರಾಘವೇಶ್ವರ ಶ್ರೀ ವಿರುದ್ಧ ಅತ್ಯಾಚಾರ ಆರೋಪ ಕೇಸ್‌ಗೆ ಸಂಬಂಧಿಸಿದಂತೆ ಶ್ರೀಗಳ  ಪರ ಹೇಳಿಕೆ ನೀಡದಂತೆ ಅನಾಮಧೇಯ ಮಹಿಳೆಯಿಂದ ಕರೆ ಬಂದಿದೆ. ದೇವಸ್ಥಾನದ ಕಚೇರಿ ಸಿಬ್ಬಂದಿ ಸತೀಶ್ ಕರೆ ಸ್ವೀಕರಿಸಿದ್ದಾರೆ. ಕಳಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮದರ್ಶಿ ಭೀಮೇಶ್ವರ್ ಜೋಷಿಗೆ ಈ ಬೆದರಿಕೆ ಕರೆ ಬಂದಿದೆ.

ನಿನ್ನೆ ಬೆಳಿಗ್ಗೆ 11.30 ಗಂಟೆ ವೇಳೆಯಲ್ಲಿ ಅನಾಮಧೇಯ ಕರೆ ಬಂದಿದ್ದು, ಸ್ವಾಮೀಜಿ ಪರವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಅದನ್ನು ಮುಂದುವರಿಸುವುದು ಬೇಡ ಎಂದು ಹೇಳಿದ್ದರು. ಸ್ವಾಮೀಜಿ ಪರವಾಗಿ ಹೇಳಿಕೆ ನೀಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದೂ ಬೆದರಿಕೆ ಹಾಕಿದ್ದಾರೆ.

ತಾವು ಮಹಿಳಾ ಆಯೋಗದವರು ಎಂದೂ ಕೂಡ ಅವರು ಹೇಳಿದ್ದರು. ಏತನ್ಮಧ್ಯೆ ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರದ ಆರೋಪ ಮಾಡುತ್ತಿರುವ ರಾಮಕಥಾ ಗಾಯಕಿ ಪ್ರೇಮಲತಾ ತಮಗೆ ಮತ್ತು ಬರಿಸುವ ಪ್ರಸಾದ ನೀಡಿ ಸ್ವಾಮೀಜಿ ಅತ್ಯಾಚಾರ ಮಾಡಿದ್ದಾರೆಂದು ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ