ಏತನ್ಮಧ್ಯೆ ಶಾಲಾ ಅಟೆಂಡರ್ ಗುಂಡಣ್ಣ ಎಂಬವನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸರಿಗೆ ಗುಂಡಣ್ಣನ ಮೇಲೆ ಶಂಕೆ ಮೂಡಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದಂತೆ 9 ಜನ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆ ನಡೆದ 6 ಜನ ಪುರುಷರು ಕೆಲಸ ಮಾಡಿದ್ದರು. ಬಾಲಕಿ ಮನೆಗೆ ಹಿಂತಿರುಗಿದಾಗ ಅಳುತ್ತಿದ್ದಳು. ಆಗ ಪೋಷಕರು ವಿಚಾರಿಸಿದಾಗ ಅಂಕಲ್ ಹೊಡೆದಳು ಎಂದು ಹೇಳಿದ್ದಳು.