ಊಟಕ್ಕಾಗಿ ಒಂದು ಗಂಟೆ ಸುತ್ತಾಡಿದ ನಿಕಟಪೂರ್ವ ಅಧ್ಯಕ್ಷ ನಾ.ಡಿಸೋಜಾ

ಭಾನುವಾರ, 1 ಫೆಬ್ರವರಿ 2015 (17:40 IST)
ಊಟಕ್ಕಾಗಿ ನಿನ್ನೆ ಒಂದು ಗಂಟೆಗೂ ಹೆಚ್ಚು ಕಾಲ ಸುತ್ತಾಡಿದ್ದೇನೆ ಎಂದು ಕನ್ನಡಸಾಹಿತ್ಯ ಸಮ್ಮೇಳನದಲ್ಲಿ ನಿಕಟಪೂರ್ವ ಅಧ್ಯಕ್ಷ ನಾ.ಡಿಸೋಜಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.  ನಿಕಟಪೂರ್ವ ಅಧ್ಯಕ್ಷನಾದ ತಮ್ಮನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು ಎಂದು ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದರು.

ಇದಲ್ಲದೇ ನಾ. ಡಿಸೋಜಾ ಅವರಿಗೆ ಬೆಳಿಗ್ಗೆ ಗುರುತಿನ ಚೀಟಿ ಇಲ್ಲವೆಂಬ ಕಾರಣದ ಮೇಲೆ ಸಭಾಂಗಣದ ಒಳಗೆ ಪ್ರವೇಶ ನೀಡಲು ನಿರಾಕರಿಸಲಾಗಿತ್ತು. ನಂತರ ತಾವು ನಿಕಟಪೂರ್ವ ಅಧ್ಯಕ್ಷರು ಎಂದು ಹೇಳಿದ ಸುಮಾರು ಹೊತ್ತಿನ ಮೇಲೆ ಒಳಕ್ಕೆ ಬಿಡಲಾಯಿತು.

ಇದು ಕನ್ನಡಕ್ಕೆ ಮತ್ತು ಕನ್ನಡ ಸಾಹಿತಿಗಳಿಗೆ ಅವಮಾನ ಎಂದೂ ನಾ. ಡಿಸೋಜಾ ಹೇಳಿದ್ದಾರೆ. ನಾ. ಡಿಸೋಜಾ ಅವರು ಕಳೆದ ಬಾರಿಯ ಸಮ್ಮೇಳನದಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದರು. 

ವೆಬ್ದುನಿಯಾವನ್ನು ಓದಿ