ಉದ್ಯಮ ನಿರ್ಮಾಣ ಹೆಸರಿನಲ್ಲಿ ಪಡೆದಿದ್ದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಬೇರೊಂದು ಕಂಪನಿಗೆ ಮಾರಾಟ ಮಾಡಿದ್ದ ಹಿನ್ನೆಲೆಯಲ್ಲಿ ಆ ಜಾಗವನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆಯಲು ಜಿಲ್ಲಾ ಪಂಚಾಯತ್ ಮುಂದಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಪ್ರಕರಣದ ಹಿನ್ನೆಲೆ: ಜಾಯ್ ಐಸ್ ಕ್ರೀಂ ಎಂಬ ಕಂಪನಿ ಉದ್ಯಮ ಸ್ಥಾಪನೆಗಾಗಿ ಭೂಮಿ ಕೋರಿ ಮನವಿ ಪತ್ರ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪುರಸ್ಕರಿಸಿದ್ದ ಸರ್ಕಾರದ ಕೆಐಎಡಿಬಿ ಮಂಡಳಿ, ಕಂಪನಿಗೆ 3.23ಗುಂಟೆ ಭೂಮಿ ನೀಡಿತ್ತು. ಆದರೆ ಕಂಪನಿಯು ಇದೇ ಭೂಮಿಯನ್ನು ಉದ್ಯಮ ಸ್ಥಾಪಿಸದೆ ಮತ್ತೊಂದು ಕಂಪನಿ ಪ್ರೆಸ್ಟೀಜ್ ಗ್ರೂಪ್ಗೆ ಮಾರಾಟ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದ ಜಿಲ್ಲಾಡಳಿತ ಇಂದು ಮತ್ತೆ ವಶಕ್ಕೆ ಪಡೆಯಲು ಮುಂದಾಗಿದೆ.