ನಿನ್ನೆ ಬೆಳಿಗ್ಗೆ 11 ಗಂಟೆಗೆ ಪ್ರಸವ ವೇದನೆಯಿಂದ ಬಳಲುತ್ತಿದ್ದ ಮಂಜುಳಾ ಮುದಿಗೌಡರ್ ಅವರನ್ನು ಗದಗ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ತಪಾಸಣೆ ನಡೆಸಿದ ಸ್ತ್ರೀರೋಗ ತಜ್ಞೆ ಶ್ರುತಿ ಪಾಟೀಲ್ ಗರ್ಭದಲ್ಲಿಯೇ ಮಗು ಸತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಮಗುವನ್ನು ಹೊರ ತೆಗೆಯುವ, ಅಸ್ವಸ್ಥ ಮಂಜುಳಾಗೆ ಚಿಕಿತ್ಸೆ ಕೊಡುವ ಗೋಚಿಗೆ ಹೋಗಿಲ್ಲ. ಹೀಗಾಗಿ ಕಳೆದ 24 ಗಂಟೆಯಿಂದ ಆಕೆ ಅಸಾಧ್ಯ ನೋವಿನಿಂದ, ವಿಪರೀತ ಜ್ವರದಿಂದ ನರಳುತ್ತಿದ್ದಾಳೆ.