ಸಾಮೂಹಿಕ ರಾಜೀನಾಮೆ ನೀಡಿದ ವೈದ್ಯರ ಜೊತೆ ಸಿಎಂ ಮಾತುಕತೆಯಲ್ಲಿ ನಿರತವಾಗಿದ್ದು, ಮಾತುಕತೆ ಸುಗಮ ದಾರಿಯಲ್ಲಿ ಸಾಗಿದೆ ಎಂದು ಮೂಲಗಳು ಹೇಳಿವೆ. ವೈದ್ಯರ ಜೊತೆ ಸಿಎಂ ಸಂಧಾನದ ಮಾರ್ಗ ಹಿಡಿದಿದ್ದು, ರಾಜೀನಾಮೆ ವಾಪಸ್ ಪಡೆಯಲು ವೈದ್ಯರು ಸಮ್ಮತಿಸಿದ್ದಾರೆಂದು ತಿಳಿದುಬಂದಿದೆ.
ಸಿಎಂ, ಆರೋಗ್ಯ ಸಚಿವ ಖಾದರ್ ನೇತೃತದಲ್ಲಿ ಈ ಸಭೆ ನಡೆದಿದ್ದು, ವೈದ್ಯರ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಅಸ್ತು ಎಂದಿದೆ. ಸಿಎಂ ಮಾತುಕತೆಯಿಂದ ವೈದ್ಯರೂ ಸಂತೃಪ್ತರಾಗಿದ್ದು, ರಾಜೀನಾಮೆ ವಾಪಸ್ ಪಡೆಯಲು ಸಮ್ಮತಿಸಿದರು ಮತ್ತು ಪುನಃ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದರು. ವೈದ್ಯರ ಮುಷ್ಕರದಿಂದಾಗಿ ಜಿಲ್ಲಾಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಪರದಾಡುವಂತಾಗಿತ್ತು.