ಕುಂದಾಪುರದ ಶ್ರೀದೇವಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಯ ಸಿಸೇರಿಯನ್ ಹೆರಿಗೆ ಮಾಡುವ ಸಂದರ್ಭದಲ್ಲಿ ವೈದ್ಯರು ಹೊಟ್ಟೆಯಲ್ಲೇ ಟವರ್ ಬಿಟ್ಟು ಹೊಲಿಗೆ ಹಾಕಿದ್ದರು. 15 ದಿನಗಳ ನಂತರ ಹೊಟ್ಟೆ ನೋವು ಕಾಣಿಸಿಕೊಂಡಾಗ ಅವರಿಗೆ ಮಾತ್ರೆಗಳನ್ನು ಕೊಟ್ಟು ಕಳಿಸುತ್ತಾರೆ. ನಂತರವೂ ಹೊಟ್ಟೆ ನೋವು ಮುಂದುವರಿದಾಗ ಸ್ಕ್ಯಾನಿಂಗ್ ಮಾಡಿದರೂ ಏನಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡದೇ ರಕ್ತ ಹೆಪ್ಪುಗಟ್ಟಿದೆ ಎಂದಷ್ಟೇ ಹೇಳಿ ಮತ್ತೊಂದು ಆಪರೇಷನ್ ಮಾಡಬೇಕು ಎಂದು ಹೇಳಿದರು.
ನಂತರ ಸುಲೋಚನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಟವಲ್ ಇರುವುದು ಪತ್ತೆಯಾಗಿದೆ. ಇದರಿಂದ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿ ಟವೆಲ್ ತೆಗೆಯಲಾಗಿದ್ದು, ಎರಡೆರಡು ಆಪರೇಷನ್ ಮಾಡಿದ್ದರಿಂದ ಸುಲೋಚನ ತೀವ್ರ ನಿಶ್ಯಕ್ತಿಯಿಂದ ಕೂಡಿದ್ದಾರೆ ಮತ್ತು ನಡೆಯಲೂ ಸಾಧ್ಯವಾಗುತ್ತಿಲ್ಲವೆಂದು ಹೇಳಲಾಗಿದೆ.