ಕುಡಿದ ಅಮಲಿನಲ್ಲಿ ಬಿಜೆಪಿ ಕಾರ್ಪೋರೇಟರ್‌ನಿಂದ ವ್ಯಾಪಾರಿ ಮೇಲೆ ಹಲ್ಲೆ!

ಶುಕ್ರವಾರ, 1 ಜುಲೈ 2016 (11:06 IST)
ಬೆಂಗಳೂರು: ಕುಡಿದ ಮತ್ತಲ್ಲಿದ್ದ ಬಿಬಿಎಂಪಿಯ 174 ನೇ ವಾರ್ಡ್‌ನ ಬಿಜೆಪಿ ಕಾರ್ಪೊರೇಟರ್ ಗುರುಮೂರ್ತಿ ರೆಡ್ಡಿ ಬೀದಿ ವ್ಯಾಪಾರಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವರದಿಯಾಗಿದೆ.
 
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಶಕ್ತಿ ಎಂಬ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಕಿಚನ್ ಫುಡ್ ಹೆಸರಲ್ಲಿ ದೋಸೆ ಕ್ಯಾಂಪ್ ನಡೆಸುತ್ತಿದ್ದರು. ನಿನ್ನೆ ಸಂಜೆ ಅಂಗಡಿ ಬಳಿ ಬಂದಿದ್ದ ಕಾರ್ಪೊರೇಟರ್ ಗುರುಮೂರ್ತಿ, ವ್ಯಾಪರ ನಿಲ್ಲಿಸುವಂತೆ ವ್ಯಾಪಾರಿಕೆ ಎಚ್ಚರಿಕೆ ನೀಡಿದ್ದಾರೆ.
 
ತದನಂತರ, ರಾತ್ರಿ ಕಂಠಪೂರ್ತಿ ಕುಡಿದು ಬಂದು ಅಂಗಡಿ ಸಾಮಾನು ಎಸೆಯಲು ಮುಂದಾಗಿದ್ದು, ಇವರ ಕೃತ್ಯಕ್ಕೆ ಅಡಿಪಡಿಸಿದ ವ್ಯಾಪಾರಿ ಶಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
 
ಸದ್ಯ ಗಾಯಗೊಂಡಿರುವ ವ್ಯಾಪಾರಿ ಶಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದು, ಎಚ್‌ಎಸ್‌ಆರ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ