ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಶಕ್ತಿ ಎಂಬ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಕಿಚನ್ ಫುಡ್ ಹೆಸರಲ್ಲಿ ದೋಸೆ ಕ್ಯಾಂಪ್ ನಡೆಸುತ್ತಿದ್ದರು. ನಿನ್ನೆ ಸಂಜೆ ಅಂಗಡಿ ಬಳಿ ಬಂದಿದ್ದ ಕಾರ್ಪೊರೇಟರ್ ಗುರುಮೂರ್ತಿ, ವ್ಯಾಪರ ನಿಲ್ಲಿಸುವಂತೆ ವ್ಯಾಪಾರಿಕೆ ಎಚ್ಚರಿಕೆ ನೀಡಿದ್ದಾರೆ.
ತದನಂತರ, ರಾತ್ರಿ ಕಂಠಪೂರ್ತಿ ಕುಡಿದು ಬಂದು ಅಂಗಡಿ ಸಾಮಾನು ಎಸೆಯಲು ಮುಂದಾಗಿದ್ದು, ಇವರ ಕೃತ್ಯಕ್ಕೆ ಅಡಿಪಡಿಸಿದ ವ್ಯಾಪಾರಿ ಶಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.