ತಮ್ಮ ಫೋನ್ ಕರೆಯನ್ನು ಅನುಪಮಾ ಶೆಣೈ ಸ್ವೀಕರಿಸಲಿಲ್ಲ ಎಂಬ ಕಾರಣದ ಮೇಲೆ ಅನುಪಮಾರನ್ನು ತಾವು ವರ್ಗಾವಣೆ ಮಾಡಿದ್ದಾಗಿ ಬಹಿರಂಗವಾಗಿ ಹೇಳಿದ್ದರು. ಅದಕ್ಕೆ ಮುಂಚೆ ಪತ್ರಕರ್ತರ ಪ್ರಶ್ನೆಗೆ ವರ್ಗಾವಣೆ ಹಿಂದೆ ತಮ್ಮ ಕೈವಾಡವಿರಲಿಲ್ಲ ಎಂದು ಹೇಳಿದ್ದರು. ಈ ನಡುವೆ ಸಿಎಂ ಸಿದ್ದರಾಮಯ್ಯ ಕೂಡ ಪರಮೇಶ್ವರ್ ನಾಯ್ಕ್ ಪರ ಬ್ಯಾಟಿಂಗ್ ಬೀಸಿದ್ದಾರೆ. ಇದರಲ್ಲಿ ತಪ್ಪು ಹುಡುಕಿಕೊಂಡು ಹೋಗೋದಕ್ಕೆ ಆಗುತ್ತಾ, ಅನುಪಮಾ ವರ್ಗಾವಣೆ ಆಡಳಿತಾತ್ಮಕ ವಿಚಾರ. ಅಕ್ರಮ ಮರಳುದಂಧೆ ವಿಚಾರದಲ್ಲಿ ವರ್ಗದ ಆರೋಪವಿದ್ದು, ಈ ಬಗ್ಗೆ ತಮಗೇನೂ ತಿಳಿದಿಲ್ಲ ಎಂದು ಸಿಎಂ ಹೇಳಿದರು.