ಚುನಾವಣೆಯಲ್ಲಿ ಸೋಲು ಗೆಲುವು ಸಹಜ: ರಮ್ಯಾಗೆ ಅಂಬಿ ಅಂಕಲ್ ಸಲಹೆ

ಸೋಮವಾರ, 19 ಮೇ 2014 (15:04 IST)
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸೋಲನುಭವಿಸಿದ್ದ ರಮ್ಯಾಗೆ ಸಚಿವ ಅಂಬಿ ಅಂಕಲ್ ಸಮಾಧಾನದ ಹೇಳಿಕೆ ನೀಡಿದ್ದಾರೆ, 
 
ಚುನಾವಣೆಗಳಲ್ಲಿ ಸೋಲು ಗೆಲುವು ಸಹಜ ತಾಳ್ಮೆಯಿಂದಿರಬೇಕು. ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸುತ್ತೀರಿ ಎಂದು ಭರವಸೆ ನೀಡಿದ್ದಾರೆ.
 
ಮಂಡ್ಯ ಜಿಲ್ಲೆಯಲ್ಲಿರುವ ಎಸ್‌.ಎಂ.ಕೃಷ್ಣ ಬಣ ಮತ್ತು ಸಚಿವ ಅಂಬರೀಷ್ ಬಣಗಳ ತಿಕ್ಕಾಟದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಇದೀಗ ಸಚಿವ ಅಂಬರೀಷ್ ಹೇಳಿಕೆ ಹೊರಬಿದ್ದಿದೆ.
 
ರಮ್ಯ ಇಂದು ದೆಹಲಿಗೆ ತೆರಳಿ ಕಾಂಗ್ರ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಸೋಲಿನ ಕಾರಣಗಳನ್ನು ವಿವರಿಸಲಿದ್ದಾರೆ ಎನ್ನುವ ವರದಿಗಳಿಂದಾಗಿ ಗುಂಪುಗಾರಿಕೆ ನಡೆಸಿದ ಮುಖಂಡರಲ್ಲಿ ಆತಂಕ ಮನೆ ಮಾಡಿದೆ. 
 
ತಮ್ಮ ಹೋರಾಟದಿಂದಾಗಿಯೇ ಬಿಜೆಪಿ ಅಭ್ಯರ್ಥಿ ಶಿವಲಿಂಗಯ್ಯ ಠೇವಣಿ ಕಳೆದುಕೊಂಡಿದ್ದಾರೆ.  ಸಾಂಘಿಕ ಹೋರಾಟದಿಂದಾಗಿಯೇ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ ಎಂದು ಸಚಿವ ಅಂಬರೀಷ್ ಸಮಾಧಾನ ಹೇಳಿದ್ದಾರೆ.     

ವೆಬ್ದುನಿಯಾವನ್ನು ಓದಿ