ಘಟನೆ ವಿವರ: ನಿನ್ನೆ ರಾತ್ರಿ ನಗರಾದ್ಯಂತ ಧಾರಾಕಾರ ಮಳೆ ಸುರಿದಿತ್ತು. ಪರಿಣಾಮ ಕಾಲೇಜಿನ ಆವರಣವು ತುಂಬು ನೀರಿನಿಂದಾವೃತವಾಗಿತ್ತು. ಆ ನಿಂತ ನೀರನ್ನು ಹೊರ ಹಾಕಲು ರಾಜಶೇಖರಯ್ಯ ಅವರಿಗೆ ಕಾಲೇಜಿನ ಆಡಳಿತ ಸಿಬ್ಬಂದಿ ಸೂಚಿಸಿದ್ದರು. ಆದ್ದರಿಂದ ಯಂತ್ರ ಬಳಸಿ ನೀರನ್ನು ಹೊರ ಹರಿಸಲು ಮುಂದಾಗಿದ್ದ ರಾಜಶೇಖರಯ್ಯ ಅವರಿಗೆ ಯಂತ್ರದ ತಂತಿಯೊಂದು ಸ್ಪರ್ಶಿಸಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.