ವಿದ್ಯತ್ ಸ್ಪರ್ಶ: ಓರ್ವ ಭದ್ರತಾ ಸಿಬ್ಬಂದಿ ಸಾವು

ಶುಕ್ರವಾರ, 24 ಏಪ್ರಿಲ್ 2015 (11:38 IST)
ವಿದ್ಯುತ್ ಪ್ರಸರಣದ ಅವಘಡಕ್ಕೆ ತುತ್ತಾದ ಭಧ್ರತಾ ಸಿಬ್ಬಂದಿಯೋರ್ವರು ಸಾವನ್ನಪ್ಪಿರುವ ಘಟನೆ ನಗರದ ಶೇಷಾದ್ರೀಪುರಂನಲ್ಲಿರುವ ಕಾನೂನು ಕಾಲೇಜಿನ ಆವರಣದಲ್ಲಿ ಇಂದು ನಡೆದಿದೆ. 
 
ಮಾಗಡಿ ಮೂಲದ ರಾಜಶೇಖರಯ್ಯ(55) ಎಬುವವರು ಘಟನೆಯಲ್ಲಿ ಮೃತಪಟ್ಟ ದುರ್ಧೈವಿಯಾಗಿದ್ದು, ಕಾಲೇಜಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 
 
ಘಟನೆ ವಿವರ: ನಿನ್ನೆ ರಾತ್ರಿ ನಗರಾದ್ಯಂತ ಧಾರಾಕಾರ ಮಳೆ ಸುರಿದಿತ್ತು. ಪರಿಣಾಮ ಕಾಲೇಜಿನ ಆವರಣವು ತುಂಬು ನೀರಿನಿಂದಾವೃತವಾಗಿತ್ತು. ಆ ನಿಂತ ನೀರನ್ನು ಹೊರ ಹಾಕಲು ರಾಜಶೇಖರಯ್ಯ ಅವರಿಗೆ ಕಾಲೇಜಿನ ಆಡಳಿತ ಸಿಬ್ಬಂದಿ ಸೂಚಿಸಿದ್ದರು. ಆದ್ದರಿಂದ ಯಂತ್ರ ಬಳಸಿ ನೀರನ್ನು ಹೊರ ಹರಿಸಲು ಮುಂದಾಗಿದ್ದ ರಾಜಶೇಖರಯ್ಯ ಅವರಿಗೆ ಯಂತ್ರದ ತಂತಿಯೊಂದು ಸ್ಪರ್ಶಿಸಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 
 
ಘಟನಾ ಸ್ಥಳಕ್ಕೆ ಶೇಷಾದ್ರೀಪುರಂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ