ಶಿವಣ್ಣನ ನೋಡಲು ಇಂದೂ ಹರಿದು ಬರುತ್ತಿದೆ ತಾರೆಯರ ದಂಡು

ಬುಧವಾರ, 7 ಅಕ್ಟೋಬರ್ 2015 (12:48 IST)
ವರ್ಕ್ ಔಟ್ ಮಾಡುವ ವೇಳೆ ತಮ್ಮ ಬಲ ಭುಜ ಹಾಗೂ ಎದೆಯಲ್ಲಿ ಸ್ವಲ್ಪ ಮಟ್ಟಿನ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಡಾ.ಶಿವರಾಜ್ ಕುಮಾರ್ ಅವರನ್ನು ನೋಡಲು ಎರಡನೇ ದಿನವಾದ ಇಂದೂ ಕೂಡ ಸ್ಯಾಂಡಲ್ ವುಡ್ ತಾರೆಯರ ದಂಡು ಹರಿದು ಬರುತ್ತಿದ್ದು, ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. 
 
ನಗರದ ಮಲ್ಯಾ ಆಸ್ಪತ್ರೆಯಲ್ಲಿರುವ ಅವರನ್ನು ಭೇಟಿ ಮಾಡುತ್ತಿರುವ ತಾರೆಯರ ದಂಡು, ಅವರ ಕುಶಲೋಪರಿ ಬಗ್ಗೆ ಚಕಿತಗೊಂಡು ಸಂಪೂರ್ಣ ವಿವರ ಪಡೆಯುತ್ತಿದೆ. ನಿನ್ನೆ ನೆನಪಿರಲಿ ಪ್ರೇಮ್, ಪ್ರಮ್-ರಕ್ಷಿತಾ, ವಿ.ರವಿಚಂದ್ರನ್, ಸುಧಾರಾಣಿ, ತಾರಾ, ಯಶ್ ಸೇರಿದಂತೆ ಇತರೆ ತಾರೆಯರು ಆಗಮಿಸಿದ್ದರು. 
 
ಇನ್ನು ಇಂದು ಸಚಿವೆ, ಚಿತ್ರರಂಗದ ಹಿರಿಯ ಕಲಾವಿದೆ ಉಮಾಶ್ರೀ, ಶ್ರೀನಾಥ್, ಹೇಮಾಚೌದರಿ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಇನ್ನಿತರೆ ಗಣ್ಯು ಆಸ್ಪತ್ರೆಗೆ ಆಗಮಿಸಿ ಶಿವಣ್ಣ ಅವರ ಕುಶಲೋಪರಿ ವಿಚಾರಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ