ನಾನು ಈಶ್ವರಪ್ಪ ಅಣ್ಣ ತಮ್ಮನಂತೆ ಇದ್ದೇವೆ ಎಂದ ಯಡಿಯೂರಪ್ಪ!

ಶುಕ್ರವಾರ, 10 ಫೆಬ್ರವರಿ 2017 (09:57 IST)
ಬೆಂಗಳೂರು: ನಾನು ಈಶ್ವರಪ್ಪ ಅಣ್ಣ ತಮ್ಮನಂತೆ ಇದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕೆ ಒಗ್ಗೂಡಿ ಹೋರಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೊಂಡಿದ್ದೇವೆ.

 
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಗಳೆಗಳನ್ನೆಲ್ಲಾ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಿದ ನಂತರ ಕೊಂಚ ಮಟ್ಟಿಗೆ ತಣ್ಣಗಾಗಿದೆ. ಇದೀಗ ಇಬ್ಬರೂ ನಾಯಕರು ದೋಸ್ತಿಯ ಮಾತನಾಡುತ್ತಿದ್ದಾರೆ. ಇದು ಎಷ್ಟು ದಿನದ ಮಟ್ಟಿಗೋ ಗೊತ್ತಿಲ್ಲ.

ಇದೇ ವೇಳೆ ಬಿಜೆಪಿಗೆ ಅಂಬರೀಶ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಮಾತನಾಡಿದ ಯಡಿಯೂರಪ್ಪ ಅಂಬಿ ಬಿಜೆಪಿ ಸೇರ್ಪಡೆ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. ಅಲ್ಲದೆ ಎಸ್ ಎಂ ಕೃಷ್ಣ ಕೂಡಾ ಬಿಜೆಪಿ ಸೇರುವ ಬಗ್ಗೆ ಸ್ಪಷ್ಟವಾಗಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ