ಮಾಜಿ ಸಂಸದ ವಿಶ್ವನಾಥ್ಗೆ ಮಾಧ್ಯಮದಲ್ಲಿ ಪ್ರಚಾರ ಪಡೆಯುವ ಹುಚ್ಚು: ಶ್ರೀನಿವಾಸ್ ಪ್ರಸಾದ್
ಶುಕ್ರವಾರ, 26 ಫೆಬ್ರವರಿ 2016 (16:28 IST)
ಮಾಜಿ ಸಂಸದ ವಿಶ್ವನಾಥ್ಗೆ ಮಾಧ್ಯಮದಲ್ಲಿ ಪ್ರಚಾರ ಪಡೆಯುವ ಹುಚ್ಚು ಹೆಚ್ಚಾಗಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.
ವಿಶ್ನನಾಥ್ ಹಿಂದೆ ಸಂಸದರಾಗಿದ್ದಾಗ ರವಿವಾರದಂದು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದರು. ಮೈಸೂರು ಬಾಗದಲ್ಲಿ ಸದಾ ಮದ್ದು ಹಾಕುತ್ತಲೇ ಇರುತ್ತಾರೆ. ಒಂದು ವೇಳೆ, ಯಾರು ಸಿಗದಿದ್ದಾಗ ಮನೆಯವರಿಗೆ ಮದ್ದು ಹಾಕುತ್ತಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ನ ಉಭಯ ನಾಯಕರ ಆರೋಪ ಪ್ರತ್ಯಾರೋಪಗಳಿಂದಾಗಿ ಮೈಸೂರು ಜಿಲ್ಲಾ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟವಾಗಿದ್ದು ಯಾವ ಹಂತಕ್ಕೆ ಬಂದು ತಲುಪುತ್ತದೆ ಎನ್ನುವುದು ಕಾದು ನೋಡಬೇಕಾಗಿದೆ.
ಮಾಜಿ ಸಂಸದ ವಿಶ್ವನಾಥ್ ಹೇಳಿಕೆ ಪ್ರತಿಕ್ರಿಯೆ ನೀಡುವಷ್ಟು ಅರ್ಹವಾಗಿರುವುದಿಲ್ಲ. ಆದ್ದರಿಂದ, ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ
ವಿಶ್ನನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಅವರ ಹೇಳಿಕೆ ಪ್ರತಿಕ್ರಿಯೆ ಕೊಡಲು ಅರ್ಹವಾಗಿದೆಯೇ ಎನ್ನುವುದೇ ಅನುಮಾನವಾಗಿದ್ದರಿಂದ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಮಾಧ್ಯಮ ಮಿತ್ರರು ಕೇಳಿದ್ದರಿಂದ ಹೇಳಿದ್ದೇನೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.