ಫೇಲ್ ಆಗಿರುವ ವಿದ್ಯಾರ್ಥಿಗಳ ತೇರ್ಗಡೆ: ಉಪನ್ಯಾಸಕರು ವಶಕ್ಕೆ

ಸೋಮವಾರ, 21 ಏಪ್ರಿಲ್ 2014 (19:40 IST)
ಬೆಂಗಳೂರು: ಫೇಲ್ ಆಗಿರುವ ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದ ಹಣ ಪಡೆದು ಪಾಸ್ ಮಾಡಿಸುವ ದಂಧೆಯಲ್ಲಿ ಭಾಗಿಯಾಗಿದ್ದ ರಾಜಾಜಿನಗರ ಪದವಿ ಕಾಲೇಜಿನ ಉಪನ್ಯಾಸಕ ಡಾ.ಕೊಟ್ರೇಶ್ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಹಿಂದೆ ಸಿಂಡಿಕೇಟ್ ಮಾಜಿ ಸದಸ್ಯ ವೇದಮೂರ್ತಿ ಎಂಬವರನ್ನು ಇದೇ ರೀತಿಯ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪ ಹೊರಿಸಲಾಗಿತ್ತು.

ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಂದ ಲಕ್ಷಾಂತರ ಹಣವನ್ನು ಪಡೆದು ಅಂಕಪಟ್ಟಿಯನ್ನು ತಿದ್ದುಪಡಿ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತಿತ್ತು. 

ವೆಬ್ದುನಿಯಾವನ್ನು ಓದಿ