ಇನ್ನು ಈತ ಸಕ್ಕರೆ ಕಾರ್ಖಾನೆಯೊಂದಕ್ಕೆ ಕಬ್ಬು ರವಾನೆ ಮಾಡಿದ್ದ. ಆದರೆ ಕಾರ್ಖಾನೆ ನೀಡಬೇಕಿದ್ದ ಬಾಕಿ ಹಣ ನೀಡಿರಲಿಲ್ಲ. ಆದ್ದರಿಂದ ಈತನೂ ಕೂಡ ರೈತರ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ. ಈ ವೇಳೆ ತೀವ್ರವಾದ ಮಾನಸಿಕ ನೋವನ್ನು ಅನುಭವಿಸಿದ ಸಿದ್ದರಾಯ ತನ್ನ ಬಳಿ ಇದ್ದ ವಿಷವನ್ನು ಸೇವಿಸಿ ಆತ್ಮಹತ್ಯೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಕೊಡಿಸುತ್ತಿದ್ದಾರೆ.