ನಾಡಹಬ್ಬ ದಸರಾಗೆ ಅಧಿಕೃತ ಚಾಲನೆ ನೀಡಿದ ರೈತ ಪುಟ್ಟಯ್ಯ

ಮಂಗಳವಾರ, 13 ಅಕ್ಟೋಬರ್ 2015 (13:29 IST)
2015ನೇ ಸಾಲಿನ ನಾಡಹಬ್ಬ ದಸರಾವನ್ನು ಪ್ರಗತಿ ಪರ ರೈತ ಪುಟ್ಟಯ್ಯ ಅವರು ಇಂದು ತಾಯಿ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. 
ಬೆಳಗ್ಗೆ 10.05ರಿಂದ 10.55ರ ನಡುವಿನ ಧನುರ್ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪುಟ್ಟಯ್ಯ ನಾಡಹಬ್ಬಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಾಮಾನ್ಯ ರೈತನಾದ ನನ್ನನ್ನು ದಸರಾ ಆಚರಣೆಯ ಉದ್ಘಾಟನೆಗೆ ಆಹ್ವಾನಿಸಿದ್ದು, ಸಂತೋಷದ ಸಂಗತಿ. ಹಾಗಾಗಿ ಸರ್ಕಾರದ ಈ ಋಣ ನನ್ನ ಪಾಲಿಗಿರಲಿದೆ ಎಂದರು. 
 
ಇನ್ನು ದಸರಾ ಹಿನ್ನೆಲೆಯಲ್ಲಿ ಮೊದಲ ದಿನವಾದ ಇಂದು ದೇವಾಲಯದಲ್ಲಿಯೇ ಚಾಲನೆ ನೀಡಲಿದ್ದ ಕಾರಣದಿಂದ ದೇವಾಲಯ, ಮಹಿಷಾಸುರ ಮರ್ದಿನಿ ಪ್ರತಿಮೆ ಮತ್ತು ಉತ್ಸವ ಮೂರ್ತಿ ರಥವನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ