ರೈತರ ಈ ಆತ್ಮಹತ್ಯೆ ಸರಣಿ ಮುಂದುವರಿದಿರುವ ಪರಿಣಾಮ ಕಳೆದ ಜೂನ್ 8ರಿಂದ ಇಲ್ಲಿಯವರೆಗೆ ಒಟ್ಟು 11 ಮಂದಿ ಸಾವನ್ನಪ್ಪಿದ್ದು, ಮಂಡ್ಯ ಜಿಲ್ಲೆವೊಂದರಲ್ಲಿಯೇ ನಾಲ್ವರು ಪ್ರಾಣ ತೆತ್ತಿದ್ದಾರೆ. ಇನ್ನು ಮೈಸೂರು-2, ಹಾವೇರಿ-1, ಹಾಸನ-2, ಬೆಳಗಾವಿ-1 ಹಾಗೂ ಯಾದಗಿರಿಯಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೂನ್ 8ರಂದು ಬೆಳಗಾವಿಯ ಬಡಾಲ ಅಂಕಲಗಿ ಗ್ರಾಮದ ನಿವಾಸಿ ಗುರುನಾಥ್ ಸಂಪಾಗಾವಿ(51) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಮೊದಲ ಆತ್ಮಹತ್ಯೆಯಾಗಿತ್ತು.