ರಜೆಯ ಮೇಲೆ ಮನೆಗೆ ಹಿಂತಿರುಗಿದ್ದ ಮಗ ಮತ್ತು ತಂದೆಯ ನಡುವೆ ಇಂದು ಬೆಳಿಗ್ಗೆ ಇದೇ ವಿಷಯಕ್ಕೆ ವಾದವಾಗಿದೆ. ತನ್ನ ಹಠವನ್ನು ಮುಂದುವರೆಸಿದ ಮಗ ತನಗೆ ಸೇರಬೇಕಾದ ಆಸ್ತಿಯನ್ನು ಕೊಟ್ಟು ಬಿಡಿ. ನಾನು ಪ್ರೀತಿಸಿದವಳೊಂದಿಗೆ ಜಮ್ಮುವಿನಲ್ಲಿ ಸಂಸಾರ ಮಾಡುತ್ತೇನೆ. ಇದರಿಂದ ಸಿಟ್ಟಿಗೆದ್ದ ತಂದೆ ಮಹದೇವ್ ಮಾರಕಾಸ್ತ್ರಗಳಿಂದ ಮಗನ ಮೇಲೆ ದಾಳಿ ಮಾಡಿ ಭೀಕರವಾಗಿ ಕೊಲೆಗೈದಿದ್ದಾನೆ ಮತ್ತು ಪೊಲೀಸರಿಗೆ ಶರಣಾಗಿದ್ದಾನೆ.