ಪ್ರಕರಣದ ಹಿನ್ನೆಲೆ: ಕಾರ್ತಿಕ್ ಎಂಬಾತ ಮೃತ ವ್ಯಕ್ತಿಯ ಪುತ್ರನಾಗಿದ್ದು, ಈತ ತನ್ನ ಸ್ನೇಹಿತ ಸತ್ಯನೊಂದಿಗೆ ಜಗಳಕ್ಕಿಳಿದಿದ್ದ. ಇದನ್ನು ಕಂಡ ಕಾರ್ತಿಕ್ ತಂದೆ ಜಗಳವನ್ನು ಬಿಡಿಸಲೆತ್ನಿಸಿದ್ದಾರೆ. ಆದರೆ ಈ ವೇಳೆ ಕುಪಿತಗೊಂಡ ಸತ್ಯ ಹಾಗೂ ಆತನ ಸ್ನೇಹಿತರು ಕಾರ್ತಿಕ್ ತಂದೆಯನ್ನು ಮನ ಬಂದಂತೆ ಥಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಣಶೇಖರ್ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಸ್ಥಳೀಯರು ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆಯ ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಶ್ರೀರಾಂಪುರ ಠಾಣಾ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸತ್ಯ ಸೇರಿದಂತೆ ಆತನ ಸ್ನೇಹಿತರಾದ ಹರೀಶ್ ಮತ್ತು ವಿಜಯ್ ಎಂಬುವವರನ್ನೂ ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.