ಹೊನ್ನಾಳಿಯ ಭೃಷ್ಟಾಟಾರ ವಿರೋಧಿ ವೇದಿಕೆ ಅಧ್ಯಕ್ಷರಾದ ಗುರುಪಾದಯ್ಯ ಕಬ್ಬಿಣಕಂತಿ ಮಠದ್ ಅವರು ರೇಣುಕಾಚಾರ್ಯ ಮತ್ತು ಅವರ ಸಹೋದರಾದ ಬಸವರಾಜಯ್ಯ, ಆರಾಧ್ಯ ಮತ್ತು ರಮೇಶ್ ಅವರ ವಿರುದ್ಧ ದಾವಣಗೆರೆಯ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದಾಖಲಾತಿಗಳು ಅರ್ಜಿದಾರರ ಆರೋಪ ಮೇಲ್ನೋಟಕ್ಕೆ ಪೂರಕವಾಗಿರುವುದರಿಂದ ಪ್ರಕರಣದ ಹೆಚ್ಚಿನ ತನಿಖೆಯನ್ನು ದಾವಣಗೆರೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ಮಾಡಬೇಕು, ಜೂನ್ 26 ರಂದು ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.