ಚಂಡಾಲ ಕೊಲೆ ಪ್ರಕರಣದ ಐವರು ಆರೋಪಿಗಳ ಬಂಧನ

ಶುಕ್ರವಾರ, 27 ನವೆಂಬರ್ 2015 (14:15 IST)
ರೌಡಿ ಶೀಟರ್ ಸಂಜಯ್ ಕುಮಾರ್ ಅಲಿಯಾಸ್  ಚಂಡಾಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಂಡಾಲ ಸುರೇಶ್ ಗುಂಪಿನ ಮೇಲೆ ದಾಳಿ ಮಾಡಲು ಯೋಜಿಸಿದ್ದ ವಿಷಯ ಸುರೇಶನಿಗೆ ತಿಳಿದು ಅದಕ್ಕೆ ಮುಂಚಿತವಾಗಿಯೇ  ಚಂಡಾಲನನ್ನು ಕೊಲೆ ಮಾಡುವ ಸಂಚನ್ನು ವಿರೋಧಿ ರೌಡಿ ಗ್ಯಾಂಗ್ ರೂಪಿಸಿತು.  

ಚಂಡಾಲ ಒಂಟಿಯಾಗಿದ್ದಾಗ  ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಿದರು. ಅಡೂರು ಸುರೇಶ್, ಬಲಾಲ್, ದಿಲೀಪ್ ಅಲಿಯಾಸ್ ಪಟ್ಟಾಭಿ, ಮುನಿ, ಸೂರ್ಯ ಅಲಿಯಾಸ್ ಸೂರ್ಯ, ಸುನಿಲ್, ರಘನಂದನ್ ಎಂಬವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.  

ಚಂಡಾಳ ಮತ್ತು ಸುರೇಶ್ ಅಡೂರು ನಡುವೆ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿ ಕುರಿತು ಭಿನ್ನಾಭಿಪ್ರಾಯ ಉಂಟಾಗಿ ಪರಸ್ಪರು ವೈರ ಸಾಧಿಸಿದ್ದರು.

ವೆಬ್ದುನಿಯಾವನ್ನು ಓದಿ