ನನಗೂ ಕೂಡ ಕೃಷ್ಣನ ಯುಕ್ತಿ ರಾಜಕಾರಣದಲ್ಲಿ ಅಗತ್ಯವಿದ್ದು, ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಆದರೂ ಕೂಡ ನನ್ನನ್ನು ಅಹಿಂದಾ ಪರವಾದ ರಾಜಕಾರಣಿ ಎನ್ನುತ್ತಾರೆ. ಇದರ ಅರ್ಥ ನಾನು ಎಲ್ಲಾ ವರ್ಗದ ಜನತೆಗೆ ನಾಯಕನಲ್ಲ ಎಂಬ ಅರ್ಥದಲ್ಲಿ ಕುಟುಕುತ್ತಿದ್ದಾರೆ. ನಾನು ಅಹಿಂದ ವರ್ಗದವರಿಗೆ ಮಾತ್ರ ಅಕ್ಕಿ ನೀಡಿಲ್ಲ, ಯಾರೋ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದ್ದವರು ಈ ರೀತಿ ಟೀಕೆ ಮಾಡುತ್ತಾರೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.