ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್

ಸೋಮವಾರ, 13 ಮಾರ್ಚ್ 2017 (19:04 IST)
ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬಳ್ಳಾರಿಯಲ್ಲಿ 2003-04ರಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರೆಡಿ ಪತ್ನಿ ಅರುಣಾ ಲಕ್ಷ್ಮೀ, ಓಎಂಸಿ ಮತ್ತು ಬ್ರಹ್ಮಿಣಿ ಸ್ಟೀಲ್ಸ್ ವಿರುದ್ಧ ಜಾರಿನಿರ್ದೇಶನಾಲಯ ದಾಖಲಿಸಿದ್ದ ಕೇಸ್ ವಜಾಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ,  ಜಪ್ತಿ ಮಾಡಿದ್ದ 884 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಿಂದಿರುಗಿಸುವಂತೆ ಸೂಚಿಸಿದೆ.

ಇಡಿ ಕೇಸಿಗೆ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, 2009ರಲ್ಲಿ ಪಿಎಂಎಲ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು  ಪೂರ್ವಾನ್ವಯ ಸಾಧ್ಯವಿಲ್ಲ ಎಂದು ಹೇಳಿದೆ.

2011ರಲ್ಲಿ ಜನಾರ್ದನ ರೆಡ್ಡಿ ಮನೆ ಮೇಲಿನ ದಾಳಿ ಬಳಿಕ ಜಾರಿ ನಿರ್ದೇಶನಾಲಯ ಹೆಲಿಕಾಪ್ಟರ್ ಸೇರಿ 884 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿತ್ತು. ಆಸ್ತಿ ಹಿಂದಿರುಗಿಸುವಂತೆ ಕೋರಿ ಜನಾರ್ದನ ರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದರು.

ವೆಬ್ದುನಿಯಾವನ್ನು ಓದಿ