ರಾಜ್ಯಕ್ಕೆ ಕೇಂದ್ರ ಸರ್ಕಾರ ಘೋಷಿಸಿದ್ದ ನೂತನ ನಾಲ್ಕು ರೈಲುಗಳನ್ನು ಕೇಂದ್ರ ಸಚಿವ ಸುರೇಶ್ ಪ್ರಭು ಅವರು ಇಂದು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಈ ನಾಲ್ಕು ರೈಲುಗಳು ನಗರದಿಂದ ವಿವಿದೆಡೆಗೆ ಸಂಚರಿಸಲಿದ್ದು, ಯಶವಂತಪುರ-ಕಟ್ರಾ,ಟಾಟಾ ನಗರ-ಯಶವಂತಪುರ, ಹಾಗೂ ಪಾಟ್ನಾ-ಬೆಂಗಳೂರಿಗೆ ಸಂಚರ ಆರಂಭಿಸಲಿವೆ.
ಉದ್ಘಾ'ಟನಾ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರುಗಳಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಹಾಗೂ ಸಂಸದ ಪಿ.ಸಿ.ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.