ರಾಜ್ಯದಲ್ಲಿ ನಾಲ್ಕು ನೂತನ ರೈಲುಗಳ ಸಂಚಾರ ಆರಂಭ

ಗುರುವಾರ, 29 ಜನವರಿ 2015 (18:27 IST)
ರಾಜ್ಯಕ್ಕೆ ಕೇಂದ್ರ ಸರ್ಕಾರ ಘೋಷಿಸಿದ್ದ ನೂತನ ನಾಲ್ಕು ರೈಲುಗಳನ್ನು ಕೇಂದ್ರ ಸಚಿವ ಸುರೇಶ್ ಪ್ರಭು ಅವರು ಇಂದು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. 
 
ಈ ನಾಲ್ಕು ರೈಲುಗಳು ನಗರದಿಂದ ವಿವಿದೆಡೆಗೆ ಸಂಚರಿಸಲಿದ್ದು, ಯಶವಂತಪುರ-ಕಟ್ರಾ,ಟಾಟಾ ನಗರ-ಯಶವಂತಪುರ, ಹಾಗೂ ಪಾಟ್ನಾ-ಬೆಂಗಳೂರಿಗೆ ಸಂಚರ ಆರಂಭಿಸಲಿವೆ. 
 
ಉದ್ಘಾ'ಟನಾ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರುಗಳಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಹಾಗೂ ಸಂಸದ ಪಿ.ಸಿ.ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ವೆಬ್ದುನಿಯಾವನ್ನು ಓದಿ