ಗಣ್ಯವ್ಯಕ್ತಿಗಳ ಮಕ್ಕಳಾದ ಮೂವರು ಈ ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಕೇಳಿಬಂದಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಪಿ ಅನುಪಮ್ ಅಗರವಾಲ್ ಸ್ಥಳಕ್ಕೆ ಆಗಮಿಸಿದ್ದಾರೆ. ಬಿಹಾರ ಮೂಲದ ಯುವತಿಗೆ ಮೆಜೆಸ್ಟಿಕ್ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಅರುಣ್ ಕುಮಾರ್ ಎಂಬವ ಕೂರಿಸಿಕೊಂಡು ಬಲವಂತವಾಗಿ ತಾವರೆಕೆರೆ ರೆಸಾರ್ಟ್ಗೆ ಕರೆದೊಯ್ದಿದ್ದ. ಅರುಣ್ ಕುಮಾರ್ ಎಂಬವನು ಬೆಂಗಳೂರಿನ ಮಾಗಡಿ ಕೆಎಂಎಫ್ ನಿರ್ದೇಶಕ ನರಸಿಂಹಮೂರ್ತಿ ಪುತ್ರನೆಂದು ಹೇಳಲಾಗುತ್ತಿದೆ.
ರೆಸಾರ್ಟ್ನಲ್ಲಿ ಕುಡಿದ ಅಮಲಿನಲ್ಲಿದ್ದ ಅರುಣ್, ಕೆಂಪಣ್ಣ ಮತ್ತೊಬ್ಬ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಬಳಿಕ ಕುಡಿದ ಮತ್ತಿನಲ್ಲಿ ಬಿದ್ದಿದ್ದರು. ಆಗ ಯುವತಿ ಅಲ್ಲಿಂದ ತಪ್ಪಿಸಿಕೊಂಡು ನಗ್ನ ಸ್ಥಿತಿಯಲ್ಲಿ ಹೊರಕ್ಕೋಡಿ ಬಂದಿದ್ದಳು. ಕಾರು ಚಾಲಕನೊಬ್ಬ ಯುವತಿಯನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾನೆ. ಯುವತಿ ಮಾನಸಿಕವಾಗಿ ಜರ್ಜರಿತಳಾಗಿದ್ದರಿಂದ ಅವಳನ್ನು ವಿಚಾರಣೆ ನಡೆಸಲು ಪೊಲೀಸರು ಹಿಂಜರಿದಿದ್ದಾರೆ.