ಎಫ್ಟಿಐಐ(ಭಾರತೀಯ ಚನಚಿತ್ರ ಮತ್ತು ದೂರದರ್ಶನ ಸಂಸ್ಥೆ)ನ ಅಧ್ಯಕ್ಷ ಸ್ಥಾನದಿಂದ ಗಜೇಂದ್ರ ಚೌವ್ಹಾಣ್ ಅವರನ್ನು ಕೆಳಗಿಳಿಸಬೇಕು ಎಂಬ ವಿದ್ಯಾರ್ಥಿಗಳ ಪ್ರತಿಭಟನೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದ್ದು, ಉದ್ಯಾನನಗರಿಯಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ಬಳಿಕ, ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಭಾರತೀಯ ಚಿತ್ರರಂಗದಲ್ಲಿ ಖ್ಯಾತ ಪರಿಣಿತರಿದ್ದಾರೆ. ಅಂತಹವರನ್ನು ಬಿಟ್ಟು, ಅನರ್ಹರೋರ್ವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದೆ. ಇದಕ್ಕೆ ಕಾರಣ ಗಜೇಂದ್ರ ಚೌವ್ಹಾಣ್ ಅವರು ಬಿಜೆಪಿಯ ಮುಖಂಡ ಎಂಬದು ಎಂದು ಆರೋಪಿಸಿದ ಅವರು, ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಸಮರ್ಥರನ್ನು ಆರಿಸಬೇಕು ಎಂದು ಆಗ್ರಹಿಸಿದರು.