ಆ್ಯಸಿಡ್ ಎರಚುತ್ತೇನೆ ಎಂದಿದ್ದಕ್ಕೆ ಹೆದರಿ ಆತ್ಮಹತ್ಯೆ

ಸೋಮವಾರ, 21 ಮಾರ್ಚ್ 2016 (08:59 IST)
ತಲೆಕೆಟ್ಟ ಪ್ರೇಮಿಯ ಹುಚ್ಚಾಟಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ ದಾರುಣ ಸಾವನ್ನಪ್ಪಿದ ಘಟನೆ ಇನ್ನು ಮನದಿಂದ ಮರೆಯಾಗುವ ಮುನ್ನವೇ ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಗರದಲ್ಲಿ ನಡೆದಿದೆ. 
 
ಜೆ.ಜೆ ನಗರದ ಜನತಾ ಕಾಲೋನಿಯಲ್ಲಿ  ಈ ಘಟನೆ ನಡೆದಿದ್ದು ಮೃತಳನ್ನು 15 ವರ್ಷದ ಸೌಂದರ್ಯ ಎಂದು ಗುರುತಿಸಲಾಗಿದೆ. ಬಾಲಕಿಗೆ ಪ್ರವೀಣ್ ಎಂಬಾತ ತನ್ನನ್ನು ಪ್ರೀತಿಸು ಎಂದು ಕಾಡುತ್ತಿದ್ದ.  ಈ ಮೊದಲು ಆತನನ್ನು ಪ್ರೀತಿಸುತ್ತಿದ್ದ ಬಾಲಕಿ ಹೆತ್ತವರ ಒತ್ತಾಯಕ್ಕೆ ಮಣಿದು ಆತನಿಂದ ದೂರವಿದ್ದಳು. ಆದರೆ ಬೆನ್ನು ಬಿಡದ ಪ್ರವೀಣ್ ಆಕೆಯನ್ನು ಕಾಡುವುದನ್ನು ಮುಂದುವರೆಸಿದ್ದ.
 
ಕಳೆದ ಗುರುವಾರ ಬೆಳಗ್ಗೆ  ತನ್ನನ್ನು ಪ್ರೀತಿ ಮಾಡು ಇಲ್ಲದಿದ್ರೆ ಆ್ಯಸಿಡ್ ಹಾಕುತ್ತೇನೆ ಎಂದು ಬೆದರಿಸಿದ್ದ. ಇದರಿಂದ ಬೆದರಿದ ಬಾಲಕಿ ಮನೆಗೆ ಬಂದು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಸೌಂದರ್ಯಳ ಕಿರುಚಾಟ ಕೇಳಿದ ಸ್ಥಳೀಯರು ಆಕೆಯನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆ ದಾಖಲು ಮಾಡಿದ್ದರು. ಆದ್ರೆ 90% ಸುಟ್ಟಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಶನಿವಾರ ತಡ ರಾತ್ರಿ ಸಾವನ್ನಪಿದ್ದಾಳೆ. 
 
ಸಾಯುವ ಮುನ್ನ ಸೌ೦ದಯ೯ ಕೊಟ್ಟ ಹೇಳಿಕೆ ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ