ಉಡುಪಿ ಜಿಲ್ಲಾಡಳಿತದ ವತಿಯಿಂದ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ವಾಲ್ಮೀಕಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಆಹಾರ ಪದ್ಧತಿಯ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಶ್ರೀ ರಾಮ ಹಾಗೂ ಶ್ರೀಕೃಷ್ಣರು ಸಹ ಮಾಂಸಾಹಾರಿಗಳೇ ಆಗಿದ್ದರು. ದೇಶದಲ್ಲಿ ಅನೇಕ ವಿದ್ವಾಂಸರು ಇದ್ದಾರೆ ಈ ಕುರಿತು ಚರ್ಚೆಯಾಗಲಿ ಎಂದರು.
ಮಹಾ ಸಾಧನೆ ಮಾಡಲು ಜಾತಿ ಮುಖ್ಯವಲ್ಲ. ಮಹಾಭಾರತ ಬರೆದ ವ್ಯಾಸರಾಯರು ಮದುವೆಯಾಗದ ಮೀನುಗಾರ ಮಹಿಳೆಯ ಮಗ. ಈ ಕಾಲದಲ್ಲಿ ಅಂತವರು ಇರುತ್ತಿದ್ದರೆ ಸಮಾಜವು ಬಹಿಷ್ಕಾರ ಹಾಕುತ್ತಿತ್ತು. ಜಾತಿ ಬಗ್ಗೆ ಮಾತನಾಡಲು ನಮಗೆ ಮಾತ್ರ ಅಧಿಕಾರ ಹಾಗೂ ಪೂಜೆ ಮಾಡುವುದು ನಮಗೆ ಮಾತ್ರ ಹಕ್ಕು ಎಂದು ಹೇಳಿಕೊಳ್ಳುವವರಿಗೆ ಪುರಾಣ, ಇತಿಹಾಸಗಳು ಕಣ್ಣು ತೆರೆಸುತ್ತದೆ ಎಂದು ಸಚಿವ ಪ್ರಮೋದ್ ಮಾದ್ವರಾಜ್ ಹೇಳಿದರು.