ಆರೋಪವೇನು?
ಈತ ಗ್ರಾಹಕರಿಂದ ವಿದ್ಯತ್ ಬಿಲ್ನ್ನು ಪಡೆಯಲು ಗ್ರಾಮಗಳಿಗೆ ತೆರಳುತ್ತಿದ್ದ. ಈ ವೇಳೆ ಗ್ರಾಹಕರು 2000 ಬಿಲ್ ಪಾವತಿಸಬೇಕಾಗಿದ್ದಲ್ಲಿ ಅಷ್ಟನ್ನೂ ಕೂಡ ಪಡೆದು ಬಿಲ್ನಲ್ಲಿ ಮಾತ್ರ 1000 ಎಂದು ಮಾತ್ರವೇ ನಮೂದಿಸುತ್ತಿದ್ದ. ಅಲ್ಲದೆ ಗ್ರಾಹಕರು ಪಾವತಿಸಿದ ಹಣವನ್ನು ಬೆಸ್ಕಾಂ ಇಲಾಖೆಗೂ ಕೂಡ ಸರಿಯಾಗಿ ಲೆಕ್ಕ ನೀಡುತ್ತಿರಲಿಲ್ಲ. ಈ ಮೂಲಕ ಕಳೆದ ಹಲವು ತಿಂಗಳುಗಳಿಂದ ಸರ್ಕಾರಕ್ಕೆ ವಂಚಿಸುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೌಕರಿಯಿಂದ ಅಮಾನತುಗೊಳಿಸಲಾಗಿದೆ.