ಈ ಬಗ್ಗೆ ನಗರದ ಸಂಚಾರಿ ಪೊಲೀಸ್ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಎಂ.ಎ.ಸಲೀಂ ಅವರು ಪ್ರತಿಕ್ರಿಯಿಸಿದ್ದು, ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಇತರೆ ಪ್ರಯಾಣಿಕರಿಗೆ ತೊಂದರೆಯಾಗುವುದಲ್ಲದೆ ಪುಂಡರು ಕೆಲವರ ಮೇಲೆ ಎರಗುವುದರಿಂದ ಪ್ರಾಣ ಹಾನಿಯೂ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಐಪಿಸಿ ಸೆಕ್ಷನ್ 160ರ ಅಡಿಯಲ್ಲಿ ಪ್ರಕಱಣ ದಾಖಲಿಸಿಕೊಳ್ಳಲಾಗುವುದು ಎಂದರು.
ಇದೇ ವೇಳೆ, ಸಿಸಿಟಿ ದೃಶ್ಯಾವಳಿಗಳನ್ನಾಧರಿಸಿ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದ ಆಯುಕ್ತರು, ಇಂತಹ ಪ್ರಕರಣಗಳಿದ್ದಲ್ಲಿ ಪೊಲೀಸರಿಗೆ ಸಂದೇಶ ಮುಟ್ಟಿಸಿ ಎಂದು ಮನವಿ ಮಾಡಿದರು.