ಸರ್ಕಾರ ಪರಿಹಾರವಾಗಿ ನೀಡಿ ಅಪಮಾನ ಮಾಡಿದೆ, ಚೆಕ್ ಬೇಡ: ಶೋಭಾ

ಮಂಗಳವಾರ, 13 ಅಕ್ಟೋಬರ್ 2015 (15:28 IST)
ಜಿಲ್ಲೆಯ ಪಾಂಡವಪುರ ತಾಲೂಕಿನ ಸಣಬದಕೊಪ್ಪಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಲೋಕೇಶ್ ಕುಟುಂಬಕ್ಕೆ ಸರ್ಕಾರ ಚೆಕ್‌ನ್ನು ನೀಡಿ ಮತ್ತೆ ಹಿಂಪಡೆದಿದ್ದ ಹಿನ್ನೆಲೆಯಲ್ಲಿ ಮೃತ ರೈತನ ಪತ್ನಿ ಶೋಭಾ ಪ್ರತಿಕ್ರಿಯಿಸಿದ್ದು, ಸರ್ಕಾರ ಮತ್ತೆ ಚೆಕ್ ನೀಡುಲು ಮುಂದಾಗಿದ್ದು ಸ್ವೀಕರಿಸುವುದಿಲ್ಲ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ರೈತ ಮತಪಟ್ಟಿದ್ದಾನೆ ಎಂಬ ಕನಿಕರದಿಂದ ರಾಹುಲ್ ಗಾಂಧಿ ಅವರು ಚೆಕ್ ವಿತರಿಸಿದ್ದರು. ಆದರೆ ಆ ಚೆಕ್‌ನ್ನು ಐದು ನಿಮಿಷವೂ ನನ್ನ ಕೈಯಲ್ಲಿರಲು ಬಿಡದೆ ಸಚಿವ ಅಂಬರೀಶ್ ಅವರು ಹಿಂಪಡೆದಿದ್ದರು. ಅಲ್ಲದೆ ಹಿಂಪಡೆದು ಈಗಾಗಲೇ ಮೂರು ದಿನಗಳಾಗಿವೆ. ಈ ನಡುವೆ ಮತ್ತೆ ಚೆಕ್ ನೀಡಲು ಸರ್ಕಾರದ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ ಆದರೆ ನಾನು ಮತ್ತೆ ಸ್ವೀಕರಿಸಲು ಸಿದ್ಧಳಿಲ್ಲ ಎಂದರು. 
 
ಇದೇ ವೇಳೆ, ಚೆಕ್ ಹಿಂಪಡೆಯುವ ಮೂಲಕ ನಮಗೆ ಅಪಮಾನ ಮಾಡಲಾಗಿದೆ. ಆದ ಕಾರಣ ಅವಮಾನ ಸಹಿಸಿಕೊಂಡು ನಾನು ಮತ್ತೆ ಚೆಕ್ ಪಡೆಯುವುದಿಲ್ಲ. ಸರ್ಕಾರ ನೀಡುವ ಯಾವ ಪರಿಹಾರವೂ ನಮಗೆ ಬೇಡ. ನಾನು ನನ್ನ ಮಕ್ಕಳೊಂದಿಗೆ ಬದುಕಿ ತೋರಿಸುತ್ತೇನೆ ಎಂದು ಕಡ್ಡಿ ತುಂಡಾದಂತೆ ನುಡಿದರು. 

ವೆಬ್ದುನಿಯಾವನ್ನು ಓದಿ