ರಾಜ್ಯಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ: ಯಡಿಯೂರಪ್ಪ ಆರೋಪ

ಶುಕ್ರವಾರ, 21 ನವೆಂಬರ್ 2014 (13:34 IST)
ಕಿಸ್ ಆಫ್ ಲವ್ ಬಗ್ಗೆ ನನ್ನ ವಿರೋಧವಿದೆ. ಅದು ಅಸಹ್ಯ ಹುಟ್ಟಿಸುವ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸದಂತೆ ಬಿಜೆಪಿ ಮುಖಂಡ ಯಡಿಯೂರಪ್ಪ ಸಲಹೆ ಮಾಡಿದರು.

ಈ ನಡುವೆ ರಾಜ್ಯಸರ್ಕಾರದ ಕಾರ್ಯವೈಖರಿ ವಿರುದ್ಧ  ಟೀಕೆ ಮಾಡುತ್ತಾ, ರಾಜ್ಯಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದು,  ರಾಜ್ಯದಲ್ಲಿ ಕಾಂಗ್ರೆಸ್ ತುಘಲಕ್ ದರ್ಬಾರ್ ನಡೆಸುತ್ತಿದೆ. ಸ್ವೇಚ್ಛಾಚಾರವಾಗಿ ವರ್ತಿಸುತ್ತಿದೆ.

 ಸರ್ಕಾರದ ವಿರುದ್ಧ ಪ್ರತಿಭಟನೆ ಸಲುವಾಗಿ ಡಿ. 6ರಿಂದ ಬಿಜೆಪಿ ಮಹಿಳಾ ಘಟಕದಿಂದ ಕಿತ್ತೂರಿನಿಂದ ಬೆಳಗಾವಿವರೆಗೆ ಪಾದಯಾತ್ರೆ ನಡೆಸಲಾಗುತ್ತದೆ. ಡಿ. 9ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವಿದೆ ಎಂದು ಹಾನಗಲ್‌ನಲ್ಲಿ ಯಡಿಯೂರಪ್ಪ ಹೇಳಿದರು. 

 

ವೆಬ್ದುನಿಯಾವನ್ನು ಓದಿ