ಸರಕಾರದಿಂದ ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ: ಕುಮಾರಸ್ವಾಮಿ
ಬುಧವಾರ, 2 ಮಾರ್ಚ್ 2016 (21:11 IST)
ಕೇಂದ್ರ ಸರಕಾರ ವಿಪಕ್ಷ ನಾಯಕರ ಫೋನ್ಗಳ ಕರೆಯನ್ನು ಕದ್ದಾಲಿಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ತಮಗೆ ಮಾಹಿತಿ ನೀಡಿದ್ದು ಯಾವುದೇ ಕಾರಣಕ್ಕೂ ಲ್ಯಾಂಡ್ಲೈನ್ ಅಥವಾ ಮೊಬೈಲ್ಪೋನ್ನಿಂದ ಕರೆ ಮಾಡದಂತೆ ಸಲಹೆ ನೀಡಿದ್ದರು ಎಂದು ತಿಳಿಸಿದ್ದಾರೆ.
ನಿಮ್ಮ ಫೋನ್ ಟ್ಯಾಪ್ ಆಗುತ್ತಿರುವುದರಿಂದ ಲ್ಯಾಂಡ್ಲೈನ್ ಅಥವಾ ಮೊಬೈಲ್ಪೋನ್ನಿಂದ ಕರೆ ಮಾಡದಂತೆ ಗುಲಾಮ್ ನಬಿ ತಿಳಿಸಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.