ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಸಾಕಷ್ಟು ಮಂದಿ ಸಾಧಕರಿದ್ದು, ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಸುಧಾರಣೆ ಹಾಗೂ ದೇಶದ ಅಭಿವೃದ್ಧಿಗೆ ಮಹತ್ವ ಪೂರ್ಣವಾದ ಕೊಡುಗೆ, ಕಾಣಿಕೆ ಸಲ್ಲಿಸಿದವರಿದ್ದಾರೆ. ಅವರೆಲ್ಲರೂ ನಿಧನರಾಗಿದ್ದು, ಎಲ್ಲರೂ ಕೂಡ ಪ್ರಶಸ್ತಿಗೆ ಅರ್ಹರೇ. ಆದ ಕಾರಣ ಎಲ್ಲರಿಗೂ ಇಂತಹ ಅತ್ಯುನ್ನತ ಪ್ರಶಸ್ತಿಯನ್ನು ನೀಡಲು ಸಾಧ್ಯವಿಲ್ಲ. ಅಲ್ಲದೆ ಪರಿಗಣಿಸುವಾಗ ಸಾಕಷ್ಟು ಗೊಂದಲಗಳು ಏರ್ಪಡುತ್ತವೆ. ಯಾರಾದರೂ ಓರ್ವರಿಗೆ ನೀಡಿದಲ್ಲಿ ಮತ್ತೋರ್ವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಹಾಗಾಗಿ ಸರ್ಕಾರ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.