ಈ ಘಟನೆಯು ಹೆಬ್ಬಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೆ.ನಿಡುಗಣೆ ಗ್ರಾಮದಲ್ಲಿ ನಡೆದಿದ್ದು, ಇಲ್ಲಿ ಪಂಚಾಯತ್ ಚುನಾವಣಾ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಬೋಪಣ್ಣ, ರಾಮ್ ತಮ್ಮಯ್ಯ ಹಾಗೂ ಅಯ್ಯಪ್ಪ ಎಂಬುವವರ ನಡುವೆ ವಾಗ್ವಾದ ಏರ್ಪಟ್ಟಿತ್ತು ಎನ್ನಲಾಗಿದ್ದು, ಈ ವೇಳೆ ಅವರವರ ಬೆಂಬಲಿಗರೂ ಕೂಡ ವಾಗ್ವಾದದಲ್ಲಿ ತಲೆದೋರಿದ ಪರಿಣಾಮ ಘರ್ಷಣೆ ನಡೆದಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಭ್ಯರ್ಥಿ ಬೋಪಣ್ಣ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಈ ಸಂಬಂಧ ಇತರೆ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಗೆ ಕಾರಣರಾಗಿ ಪರಾರಿಯಾಗಿರುವ ಅಭ್ಯರ್ಥಿಗಳಾದ ತಮ್ಮಯ್ಯ ಹಾಗೂ ಅಯ್ಯಪ್ಪ ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.