ಬಾಹುಬಲಿ-2 ಚಿತ್ರದ ರಿಲೀಸ್`ಗೆ ಕನ್ನಡ ಸಂಘಟನೆಗಳ ಗ್ರೀನ್ ಸಿಗ್ನಲ್

ಶನಿವಾರ, 22 ಏಪ್ರಿಲ್ 2017 (12:10 IST)
ಕಾವೇರಿ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಗ್ಗೆ ನಟ ಸತ್ಯರಾಜ್ ವಿಷಾಧ ವ್ಯಕ್ತಪಡಿಸಿದ ಬಳಿಕ ಕನ್ನಡಪರ ಸಂಘಟನೆಗಳು ಪ್ರತಿಭಟನೆಯನ್ನ ಹಿಂಪಡೆದಿವೆ. ಸತ್ಯರಾಜ್ ತಮ್ಮ ತಪ್ಪನ್ನ ಒಪ್ಪಿಕೊಂಡ ಹಿನ್ನೆಲೆಯಲ್ಲಿ ತಮ್ಮ ಪ್ರತಿಭಟನೆ ಹಿಂಪಡೆಯುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ವಿಷಾಧ ಮತ್ತು ಕ್ಷಮೆಯಾಚನೆಯಲ್ಲಿ ಅಷ್ಟೊಂದು ವ್ಯತ್ಯಾಸವೇನೂ ಇಲ್ಲ. ಮತ್ತೆ ಸತ್ಯರಾಜ್ ಏನಾದರೂ ಕನ್ನಡದ ಬಗ್ಗೆ ಮಾತನಾಡಿದರೆ ನಿಮ್ಮ ಚಿತ್ರಗಳಿಗೆ ಅವಕಾಶ ನೀಡುವುದಿಲ್ಲ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಬಾಹುಬಲಿ-2 ಚಿತ್ರದ ರಿಲೀಸ್`ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಕಾವೇರಿ ನದಿ ಕುರಿತ ವಿವಾದಿತ ಹೇಳಿಕೆ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ ವಿಡಿಯೋ ಬಿಡುಗಡೆ ಮಾಡಿದ್ದರು. ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ. ನಾನು ಕನ್ನಡ ವಿರೋಧಿಯಲ್ಲ. ಆವೇಶದಿಂದ  ಆಡಿದ ಮಾತನ್ನ ದೊಡ್ಡದು ಮಾಡಬೇಡಿ. ಬಾಹುಬಲಿ-2 ಪ್ರದರ್ಶನಕ್ಕೆ ಅವಕಾಶ ಕೊಡಿ ಎಂದು ಕನ್ನಡಿಗರ ಬಳಿ ಮನವಿ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ