ಸಾಂಬಾರ್ ಸರಿಯಿಲ್ಲ, ರಸಂ ಮಾಡಿಲ್ಲವೆಂದು ಹೇಳಿ ಪರಾರಿಯಾದ ವರ

ಭಾನುವಾರ, 31 ಜನವರಿ 2016 (13:20 IST)
ಆರತಕ್ಷತೆಯಲ್ಲಿ ಸಾಂಬಾರ್ ಸರಿಯಿಲ್ಲವೆಂಬ ಕಾರಣಕ್ಕೆ ವರನ ಕಡೆಯವರು ಮದುವೆಯನ್ನು ಮುರಿದುಹಾಕಿ ಪರಾರಿಯಾಗಿರುವ ಘಟನೆ ನಡೆದಿದೆ.  ಮಲತಾಯಿ ಗೌರಮ್ಮ ಖ್ಯಾತೆ ತೆಗೆದು ಮಲತಾಯಿಯ ಬೆಂಬಲಕ್ಕೆ ನಿಂತ ವರ ಮದುವೆ ಮನೆಯಿಂದ ಎದ್ದುಹೋದ ಘಟನೆ ನಡೆದಿದೆ.

ಕುಣಿಗಲ್ ಪಟ್ಟಣದ ಕೊಲ್ಲಾಪುರದಮ್ಮ ಕಲ್ಯಾಣಮಂಟಪದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಕುಣಿಗಲ್ ಪಟ್ಟಣದ ಯುವತಿಯನ್ನು ವರ ರಾಜು ಮದುವೆಯಾಗಬೇಕಿತ್ತು.  ಆರತಕ್ಷತೆ ಸಮಾರಂಭದಲ್ಲಿ ವರ ರಾಜುವಿನ ಮಲತಾಯಿಗೆ ಊಟ ಬಡಿಸುವಾಗ ಸಾಂಬಾರ್ ಚೆನ್ನಾಗಿಲ್ಲದ ಬಗ್ಗೆ ಹಾಗೂ ರಸಂ ಮಾಡಿಲ್ಲದಿರುವ ಬಗ್ಗೆ  ಖ್ಯಾತೆ ತೆಗೆದು ಗಲಾಟೆ ಷುರು ಮಾಡಿದರು.

ವರ ಕೂಡ ಮಲತಾಯಿ ಮಾತಿಗೆ ಬೆಂಬಲವಾಗಿ ನಿಂತು ವಧು ಸೌಮ್ಯಳಿಗೆ ತಾಳಿಕಟ್ಟಲು ಎಷ್ಟು ಬೇಡಿಕೊಂಡರೂ ಕೇಳದೇ ನಿರಾಕರಿಸಿ ಅಲ್ಲಿಂದ ನಿರ್ಗಮಿಸಿದ್ದ. ಕೊನೆಗೆ ಅದೇ ಮುಹೂರ್ತದಲ್ಲಿ ಸಂಬಂಧಿಕರೊಬ್ಬರು ಮದ್ದೂರಿನಿಂದ ಬಂದು ವಧುವನ್ನು ಮದುವೆಯಾಗಲು ಒಪ್ಪಿದರು.

ವೆಬ್ದುನಿಯಾವನ್ನು ಓದಿ