ಕಳೆದ ಭಾನುವಾರ, ಸೋಮುವಾರ ಮತ್ತು ಮಂಗಳವಾರದಂದು ನಾನು ಅವನ ಜೊತೆಗೆ ಇದ್ದೆ. ನಿನ್ನೆ ಕಾಂಚಿಪುರಂ ಕೋರ್ಟ್ಗೆ ಹೋಗಬೇಕು ಎಂದು ಹೇಳಿದ್ದಾಗಿ ತಿಳಿಸಿದ್ದ. ಆದರೆ, ಇಂದು ಮಗನ ಸಾವಿನ ಸುದ್ದಿ ತಿಳಿದು ಆಘಾತವಾಗಿದೆ ಎಂದು ಹೇಳಿದ್ದಾರೆ.
ಮಗನ ಮೃತದೇಹ ತೆಗೆದುಕೊಂಡು ಹೋಗಲು ಬೆಂಗಳೂರಿನಿಂದ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಗೆ ಆಗಮಿಸಿದ್ದ ಹರೀಶ್ ತಂದೆ ನಾಗರಾಜ, ಮಗನನ್ನು ಕಂಡು ಕಣ್ಣೀರಿಟ್ಟರು.ಮಗನ ಮೃತದೇಹ ನೋಡಿದಲ್ಲಿ ಆತ್ಮಹತ್ಯೆ ಎಂದು ಕಾಣುವುದಿಲ್ಲವೆಂದು ಸಂಶಯ ವ್ಯಕ್ತಪಡಿಸಿದರು.
ಇತ್ತೀಚೆಗಷ್ಟೆ ಹರೀಶ್ಗೆ ಎಸ್ಪಿ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಮಧುರೈನಿಂದ ಚೆನ್ನೈಗೆ ವರ್ಗವಾಗಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿರಬಹುದು. ಆದರೆ, ಪೋಸ್ಟ್ ಮಾರ್ಟಂ ನಂತರ ಸತ್ಯ ಸಂಗತಿ ಬಹಿರಂಗವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.