ಹೊಳೆನರಸೀಪುರ ತಾಲ್ಲೂಕಿನ ಡಾ.ಎ.ಆರ್.ನಾಗರಾಜು ಮತ್ತು ಲಕ್ಷ್ಮೀ ದಂಪತಿಗಳ ಪುತ್ರ ರಾಘವೇಂದ್ರ ಕಳೆದೆರಡು ವರ್ಷಗಳಿಂದ ಚೀನಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ಬೀಜಿಂಗ್ನ ಯುವತಿಯ ಪರಿಚಯವಾಗಿದೆ.ಪರದೇಶದಲ್ಲಿ ಭಾಷೆಯ ಸಮಸ್ಯೆಯಿಂದ ಪರದಾಡುತ್ತಿದ್ದ ರಾಘವೇಂದ್ರ ಅವರಿಗೆ ಕಂಪನಿಯಲ್ಲಿ ಸಹೋದ್ಯೋಗಿಯಾಗಿದ್ದ ಯುವಾನ್ ನೆರವಿಗೆ ಬಂದಿದ್ದಾಳೆ.