ಯುವಕನ ದೇಹ ಎರಡು ಹೋಳಾಗಿದ್ದರೂ ಕೈಗಳನ್ನು ಮೇಲೆತ್ತಿ ಜೀವವುಳಿಸುವಂತೆ ಅಂಗಲಾಚಿದ. ಸಾವು ನಿಶ್ಚಿತವೆಂದು ತಿಳಿದಮೇಲೆ ತನ್ನ ಬಳಿ ನಿಂತಿದ್ದ ಜನರಿಗೆ ಸತ್ತಮೇಲಾದರೂ ತನ್ನ ಅಂಗಾಂಗಗಳನ್ನು ದಾನ ಮಾಡಿ ಎಂದು ಹೇಳುವ ಮೂಲಕ ಹೃದಯವೈಶ್ಯಾಲ್ಯತೆ ಮೆರೆದಿದ್ದ. ಇಂತಹ ಘಟನೆಯನ್ನು ನಾನೆಂದೂ ಕೇಳಿಲ್ಲ. ಹೆಲ್ಮೆಟ್ ಧರಿಸಿದ್ದರಿಂದ ಮೆದುಳು, ಕಣ್ಣಿಗೆ ತೊಂದರೆಯಾಗಿಲ್ಲ. ಮೃತಪಟ್ಟ 6 ಗಂಟೆಯೊಳಗೆ ಕಣ್ಣನ್ನು ದಾನ ಮಾಡಬಹುದು ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.