ಭಾರೀ ಮಳೆ: ವ್ಯಕ್ತಿ ನೀರುಪಾಲು

ಸೋಮವಾರ, 5 ಅಕ್ಟೋಬರ್ 2015 (12:16 IST)
ತುಂಬಿ ಹರಿಯುತ್ತಿದ್ದ ಹಳ್ಳವೊಂದನ್ನು ದಾಟಲು ಯತ್ನಿಸಿದ ವ್ಯಕ್ತಿಯೋರ್ವ ನೀರಿನಲ್ಲಿಯೇ ಕೊಚ್ಚಿ ಹೋಗಿರುವ ಘಟನೆ ನಿನ್ನೆ ಬಳ್ಳಾರಿ ನಗರದ ಹೊರವಲಯದ ಅಂದ್ರಾಳ್ ಎಂಬ ಹಳ್ಳವೊಂದರಲ್ಲಿ ನಿನ್ನೆ ಸಂಜೆ ನಡೆದಿದೆ. 
 
ನಿನ್ನೆ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದ್ದು, ನೀರು ಪಾಲಾಗಿ ಪ್ರಾಣ ಕಲೆದುಕೊಂಡ ವ್ಯಕ್ತಿಯನ್ನು ದಾದಾ ಕಲಂದರ್(30) ಎಂದು ತಿಳಿದು ಬಂದಿದೆ. 
 
ಕಲಂದರ್ ನಿನ್ನೆ ಕಾರ್ಯ ನಿಮಿತ್ತ ಜಮೀನಿಗೆ ತೆರಳಿದ್ದರು. ಆದರೆ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ಹಳ್ಳವನ್ನು ದಾಟಲು ಮುಂದಾಗಿದ್ದಾರೆ. ಆದರೆ ನೀರು ಅಗಾಧ ಪ್ರಮಾಣದಲ್ಲಿ ಹರಿಯುತ್ತಿದ್ದ ಕಾರಣ ನೀರಿನ ರಭಸಕ್ಕೆ ಸಿಲುಕಿದ ವ್ಯಕ್ತಿ ಹೊರ ಬರಲಾಗಿದೆ ಕೊಚ್ಚಿ ಹೋಗಿದ್ದಾರೆ. 
 
ಮೃತ ದೇಹವನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ನಗರದ ಎಪಿಎಂಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ