ಮಳೆಯ ಅಬ್ಬರಕ್ಕೆ ಚರಂಡಿಯಲ್ಲಿ ಕೊಚ್ಚಿ ಹೋದ ಮಹಿಳೆ

ಮಂಗಳವಾರ, 19 ಆಗಸ್ಟ್ 2014 (08:37 IST)
ಗದಗ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಸುರಿದ ಭಾರಿ ಮಳೆ ಅಬ್ಬರಕ್ಕೆ ನರಗುಂದ ಪಟ್ಟಣದ ಮಹಿಳೆಯೊಬ್ಬಳು ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾರೆ.

ಮೃತ ಮಹಿಳೆಯನ್ನು  24 ವರ್ಷದ ಲಕ್ಷ್ಮೀ ಪೂಜಾರಿ ಎಂದು ಗುರುತಿಸಲಾಗಿದ್ದು, ನಿನ್ನೆ ರಾತ್ರಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಆಕೆ  ಭೀಕರ ಮಳೆ ಪರಿಣಾಮ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾಳೆ.
 
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಪೋಲಿಸರು ಮತ್ತು ಅಗ್ನಿಶಾಮಕ ದಳದವರು  ಮಹಿಳೆಯ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ. ಆಕೆಯ ಬಟ್ಟೆಗಳು ಪತ್ತೆಯಾಗಿದ್ದು, ಶೋಧ ಮುಂದುವರೆದಿದೆ. 

ವೆಬ್ದುನಿಯಾವನ್ನು ಓದಿ