ಈತ ರೈತರಿಗೆ ಹೆಚ್ಚಿನ ಬಡ್ಡಿ ದರದಲ್ಲಿ ಹಣ ಪಾವತಿಸಿ ನಿಗದಿತ ವೇಳೆಗೆ ನೀಡಲಿಲ್ಲ ಎಂದಾದಲ್ಲಿ ತೀವ್ರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಿರುಕುಳ ತಾಳಲಾರದೆ ಈತನ ವಿರುದ್ಧ ಹಣ ಪಡೆದಿದ್ದ ನಾಗಗೊಂಡನಹಳ್ಳಿಯ ರೈತ ಪ್ರಸಾದ್ ಎಂಬುವವರು ಬಂಡಿಗನವಿಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದಲಿಂಗಸ್ವಾಮಿ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು 200ಕ್ಕೂ ಅಧಿಕ ಖಾಲಿ ಚೆಕ್ಗಳನ್ನು ವಶವಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯನವರು ರೈತರಿಗೆ ಙಣ ನೀಡುವಂತೆ ಕಿರುಕುಳ ನೀಡುವ ಖಾಸಗಿ ವ್ಯವಹಾರಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ವ್ಯವಹಾರಸ್ಥ ಸಿದ್ದಲಿಂಗಸ್ವಾಮಿಯನ್ನು ಇಂದು ಬಂಧಿಸಿದ್ದಾರೆ.