ಸಿಎಂ ಸಿದ್ದರಾಮಯ್ಯ ಅವರು ಅನುಪಮಾ ಶೆಣೈ ವರ್ಗಾವಣೆ ಕುರಿತ ಪತ್ರಕರ್ತರ ಪ್ರಶ್ನೆಗೆ ಆಡಳಿತಾತ್ಮಕ ವಿಚಾರ, ಇವೆಲ್ಲಾ ಕೇಳಬೇಡಿ, ಒಂದು ವರ್ಷ ಸೇವೆ ಬಳಿಕ ವರ್ಗಾವಣೆ ಮಾಡುವುದು ಮಾಮೂಲಿ ಎಂದು ಪತ್ರಕರ್ತರಿಗೆ ಹೇಳಿ ಬಾಯಿಮುಚ್ಚಿಸಿದ್ದರು. ಈ ನಡುವೆ ಪರಮೇಶ್ವರ ನಾಯ್ಕ್ ಮತ್ತಷ್ಟು ಅಧಿಕಾರಿಗಳಿಗೆ ಧಮ್ಕಿ ಹಾಕಿದ ಬಗ್ಗೆ ವಿಡಿಯೋ ಬಯಲಾಗಿದೆ. ಪರಮೇಶ್ವರ ನಾಯಕ್ ಸುಮಾರು ಇನ್ನೂ 31 ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ ಆರೋಪವೂ ಅವರ ಮೇಲಿದೆ.