ಈ ನಡುವೆ ವಿಧಾನಪರಿಷತ್ತಿನಲ್ಲಿ ಯಳ್ಳೂರು ಪ್ರಕರಣ ಪ್ರತಿಧ್ವನಿಸಿತು.ಪ್ರಶ್ನೋತ್ತರ ವೇಳೆ ಬದಿಗೊತ್ತಿ ಯಳ್ಳೂರು ಪ್ರಕರಣ ಚರ್ಚಿಸಿ ಎಂದು ಈಶ್ವರಪ್ಪ ಒತ್ತಾಯಿಸಿದರು. ಪ್ರಶ್ನೋತ್ತರ ವೇಳೆಯ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಡಿ.ಎಚ್. ಶಂಕರಮೂರ್ತಿ ಭರವಸೆ ನೀಡಿದರು. ಯಳ್ಳೂರು ಪ್ರಕರಣದಲ್ಲಿ ಗುಪ್ತದಳ ಸಂಪೂರ್ಣ ವಿಫಲವಾಗಿದೆ ಎಂದು ಈಶ್ವರಪ್ಪ ಆರೋಪಿಸಿದರು. ಪತ್ರಕರ್ತರು, ಪೊಲೀಸರ ಮೇಲೆ ಕಲ್ಲು ತೂರಾಟವಾಗಿದೆ. ಹೈಕೋರ್ಟ್ ಆದೇಶ ಪಾಲಿಸಲು ಸರ್ಕಾರ ವಿಳಂಬಧೋರಣೆ ತೋರಿದೆ.